SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ 93ನೇ ಜನ್ಮ ದಿನೋತ್ಸವ ಆಚರಣೆ

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ 93ನೇ ಜನ್ಮ ದಿನೋತ್ಸವ ತಾ.30.11.2019ರಂದು ನಡೆಯಿತು. ಪಿಯುಸಿ ವಿಭಾಗದ ಬಹುಮಾನ ವಿತರಣಾ ಸಮಾರಂಭ ಅದೇ ದಿನ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಕೆ.ವಿ. ಬಸವನ ಗೌಡ, ಎಂ.ಡಿ. ಕುಂದೂರು ಕನ್‍ಸ್ಟ್ರಕ್ಷನ್ ಬೆಂಗಳೂರು ಹಾಗೂ ಅರ್‍ಸ್ಲಾನ್ ಮಹಮ್ಮದ್ ಕಿತ್ತೂರ್, ಭವಿಷ್ಯ ನಿಧಿ ಅಧಿಕಾರಿ ಭಾರತ ಸರಕಾರ ಆಗಮಿಸಿ ಬಹುಮಾನ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಹರಸಿದರು. ಸಂಸ್ಥೆಯ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಇತರ ಹಿರಿಯರು, ವಿದ್ಯಾರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರಮೋದ್ ಹೆಚ್. ಹಾಗೂ ಅಜಿತ್ ಕುಮಾರ್ ವಿಜೇತರ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಡಾ| ಸಿದ್ದರಾಜು ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ಡಿ. ರಾಮಚಂದ್ರ ರಾವ್ ವಂದಿಸಿದರು. ಉಪನ್ಯಾಸಕ ಯಾದವ ಎನ್. ಕಾರ್ಯಕ್ರಮ ನಿರೂಪಿಸಿದರು.