SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಧನಸಹಾಯ

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‍ನ ವತಿಯಿಂದ ಇತ್ತೀಚೆಗೆ ಅಳಿಕೆ ಗ್ರಾಮದ ಮಡಿಯಾಲ ಎಂಬಲ್ಲಿ ಕಾರು ಮತ್ತು ಬೈಕು ಪರಸ್ಪರ ಢಿಕ್ಕಿಯಾಗಿ ತೀವ್ರ ಗಾಯಗೊಂಡು ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಡಿಯಾಲ ಸಮೀಪದ ಕಲ್ಲಜೇರ ನಿವಾಸಿ ರಿತೇಶ್ ರವರ ವೈದ್ಯಕೀಯ ವೆಚ್ಚದ ಬಗ್ಗೆ ರೂ.50,000.00 ವನ್ನು ಧನ ಸಹಾಯವಾಗಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್‍ರವರು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಯಸ್. ಚಂದ್ರಶೇಖರ ಭಟ್ ವ್ಯವಸ್ಥಾಪಕರಾದ ಗಣಪತಿ ಭಟ್ ಪದ್ಯಾಣ ಮೊದಲಾದವರು ಉಪಸ್ಥಿತರಿದ್ದರು.