SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಗಣೇಶೋತ್ಸವ ಕಾರ್ಯಕ್ರಮ

Sitharama Kevala

ದಿನಾಂಕ : 06-09-2016 ಮಂಗಳವಾರ
ಸಮಯ : ಅಪರಾಹ್ನ 3:೦೦ರಿಂದ
ಮಾತಾಪಿತರನ್ನು ಗೌರವಿಸಿ – ಸೀತಾರಾಮ ಕೇವಳ

ವಿಶ್ವ ವಿರಾಟ್ ರೂಪದ ಸಾಂಕೇತಿಕ ಸ್ವರೂಪವೇ ಶ್ರೀ ವಿನಾಯಕನ ಆಕಾರ. ಮಾತಾ ಪಿತರನ್ನು ವಿಶ್ವದ ಸಮಸ್ತ ವಸ್ತುಗಳಿಗಿಂತ ಮಿಗಿಲಾಗಿ ಗೌರವಿಸಿ. ಇದು ಅವನ ಸಂದೇಶ. ಹಿರಿಯ ತಲೆಮಾರಿನ ಸೇವೆ ತ್ಯಾಗವನ್ನು ನೆನಪಿಸಲು ಚೌತಿಯ ಆಚರಣೆ. ಸಮಾಜ ಮುಖಿ ಪ್ರವೃತ್ತಿಯಿಂದ ಪ್ರಸನ್ನತೆ ಲಭಿಸುತ್ತದೆ ಎಂದು ರಾಷ್ಟ್ರಮಟ್ಟದ ಜೇಸೀ ತರಬೇತುದಾರ ಸೀತಾರಾಮ ಕೇವಳ, ಸವಣೂರು ಇವರು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಗಣೇಶೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳು ಸವಣೂರು ಇದರ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ವಹಿಸಿದ್ದರು. ಯು. ಗಂಗಾಧರ ಭಟ್ ಅಧ್ಯಕ್ಷರು, ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ನಿವೃತ್ತ ಪ್ರಾಂಶುಪಾಲ ಕೆ. ಸಂಜೀವ ಶೆಟ್ಟಿ, ಹಿರಿಯರಾದ ಎಚ್. ರಮಾನಂದ ಉಪಸ್ಥಿತರಿದ್ದರು. ವಿದ್ಯಾಕೇಂದ್ರ ಪ್ರಾಂಶುಪಾಲ ಶಿವಕುಮಾರ ಎಂ. ಸ್ವಾಗತಿಸಿ, ಇಂಗ್ಲಿಷ್ ಉಪನ್ಯಾಸಕ ಅಶೋಕ ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೀಶ ಎಂ.ಎಸ್., ಸುಶಾಂತ್ ನಾಗಣ್ಣನವರ್ ಮತ್ತು ಅಕ್ಷಯ ಸಿ.ಯಂ. ಮಾತನಾಡಿದರು. ಕನ್ನಡ ಉಪನ್ಯಾಸಕ ಶ್ರೀಧರ್ ಕೆ. ಅಳಿಕೆ ನಿರೂಪಿಸಿದರು.